ಆಕ್ಷನ್ ಕಟ್ ಕ್ರಿಯೇಶನ್ಸ್ ಲಾಂಛನದಲ್ಲಿ ಸದಾಶಿವ ಅವರು ನಿರ್ಮಿಸುತ್ತಿರುವ, ನರಸಿಂಹಮೂರ್ತಿ ಅವರ ಸಹ ನಿರ್ಮಾಣದ ಮುರಳಿ ನಿರ್ದೇಶನದ ಚಿತ್ರ ‘ಮುಮ್ತಾಜ್. ‘ನವಗ್ರಹ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ ಧರ್ಮ ಕೀರ್ತಿರಾಜ್ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಕೊಂಡಿದ್ದಾರೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ.
ಮುತ್ತಾಜ್ ಚಿತ್ರಕ್ಕಾಗಿ ಈಗಾಗಲೇ ಬೆಂಗಳೂರು, ಮೈಸೂರು ಮುಂತಾದೆಡೆ ಮತ್ತು ಕ್ಲೈಮ್ಯಾಕ್ಸ್ಗೆ ಲೀಡ್ ಆಗುವ ದೃಶ್ಯವನ್ನು ತಾಜ್ ಮಹಲ್ ಮುಂಭಾಗ ಮತ್ತು ಹಿಂಭಾಗದ ಪ್ರವೇಶ ದ್ವಾರದ ಬಳಿ ಚಿತ್ರೀಕರಣ ನಡೆಸಲಾಗಿದೆ.
ಕಾಲೇಜಿನಿಂದ ಪ್ರವಾಸ ಹೋಗಿರುತ್ತಾರೆ. ಅಲ್ಲಿ ಹೀರೋ ಹೀರೋಯಿನ್ಗೆ ಲವ್ ಪ್ರಪೋಸ್ ಮಾಡಲು ಹೋಗುವ ದೃಶ್ಯವನ್ನು ತಾಜ್ ಮಹಲ್ ಬಳಿ ಚಿತ್ರೀಕರಿಸಲಾಗಿದೆ.
ತಾಜ್ ಮಹಲ್ ಬಳಿ ಚಿತ್ರೀಕರಣ ನಡೆಸುವುದರೊಂದಿಗೆ ಚಿತ್ರದ ಶೂಟಿಂಗ್ ಸಹಾ ಮುಕ್ತಾಯಗೊಂಡಿದೆ. ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಾಗುತ್ತಿದೆ. ಝೇಂಕಾರ್ ಆಡಿಯೋ ಸಂಸ್ಥೆ ‘ಮುಮ್ತಾಜ್ ಚಿತ್ರದ ಆಡಿಯೋ ಹಕ್ಕು ಪಡೆದಿದ್ದು, ಮೇ ತಿಂಗಳಲ್ಲಿ ಚಿತ್ರದ ಮೊದಲ ಪ್ರತಿ ಬಂದ ಕೂಡಲೇ ಆಡಿಯೋ ಬಿಡುಗಡೆ ಮಾಡಲಾಗುತ್ತದೆ. ನಂತರ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಚಿತ್ರವನ್ನು ತೆರೆಗರ್ಪಿಸುವುದು ಚಿತ್ರತಂಡದ ಉದ್ದೇಶ.